ಮಹಾನಗರ : ವಾಮಂ ಜೂರು ದೇವರಪದವಿನ ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನದ ಸಪ್ತಮ ಪ್ರತಿಷ್ಠಾ ವರ್ಧಂತಿ ಮಹೋತ್ಸವ ವೇ| ಮೂ| ಪೊಳಲಿ ಸುಬ್ರಹ್ಮಣ್ಯ ತಂತ್ರಿಗಳ ನೇತೃತ್ವದಲ್ಲಿ ಆಡಳಿತ ಮೊಕ್ತೇಸರ ನವೀನ್ ಕುಮಾರ್ ಕೊಡಿಯಾಲಬೈಲ್ ಅವರ ಮುಂದಾಳತ್ವದಲ್ಲಿ ಆರಂಭಗೊಂಡಿತು.
ಆ ಪ್ರಯುಕ್ತ ಬೆಳಗ್ಗೆ ಚಂಡಿಕಾಯಾಗ ನೆರವೇರಿತು. ಕಾರ್ಯಕ್ರಮಕ್ಕೆ ನೀಲಕಂಠ ಉಮಾ ಮಹೇಶ್ವರ ದೇವಸ್ಥಾನದ ಆಡ ಳಿತ ಮೊಕ್ತೇಸರ ಶೆಡ್ಡೆ ಮಂಜುನಾಥ ಭಂಡಾರಿ, ಅಮೃತೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಚಂದ್ರಹಾಸ ರೈ ಭಾಗವಹಿಸಿದ್ದರು.