ಮಹಾನಗರ:
ಸುಜೀರಿನ ದೇವಕೀ ಕೃಷ್ಣ ರವಳನಾಥ ಮಂದಿರದಲ್ಲಿ ಪುರುಷೋತ್ತಮ ಮಾಸಾಚರಣೆಯನ್ನು ಅಧಿಕ ಮಾಸದ ಪ್ರತಿ ರವಿವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು.ಪಂಚದುರ್ಗಾ ಹವನ, ಪವಮಾನ ಹವನ, ಶ್ರೀ ಸತ್ಯನಾರಾಯಣ ಪೂಜೆ, ಪ್ರಸನ್ನ ಪೂಜೆ, ಸಾಮೂಹಿಕ ವಿಷ್ಣು ಸಹಸ್ರನಾಮ ಪಠಣ, ಸಾಮೂಹಿಕ ಪ್ರದಕ್ಷಿಣೆ/ ಪ್ರಾರ್ಥನೆ, ಅನ್ನದಾನ ಮುಂತಾದ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ರಂಗನಾಥ ಭಟ್ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನ ನೆರವೇರಿತು. ವಿವಿಧ ಭಾಗದ ಭಜಕರು ಪಾಲ್ಗೊಂಡಿದ್ದರು.