Home ಧಾರ್ಮಿಕ ಸುದ್ದಿ ರಾಘವೇಂದ್ರ ಮಠ ಬ್ರಹ್ಮಕಲಶೋತ್ಸವ ಸಭೆ

ರಾಘವೇಂದ್ರ ಮಠ ಬ್ರಹ್ಮಕಲಶೋತ್ಸವ ಸಭೆ

1938
0
SHARE

ಹೊಸಬೆಟ್ಟು: ಹೊಸಬೆಟ್ಟು ರಾಘವೇಂದ್ರ ಮಠದ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಹೊಸಬೆಟ್ಟು ಶ್ರೀ ಕ್ಷೇತ್ರದಲ್ಲಿ ಸಮಿತಿ ಪದಾಧಿಕಾರಿಗಳ ಸಭೆ, ವಿಜ್ಞಾಪನಾ ಪತ್ರ ಬಿಡುಗಡೆ ಜರಗಿತು.

ಬ್ರಹ್ಮಕಲಶೋತ್ಸವ ಸಂದರ್ಭ ವಿವಿಧ ಸಮಿತಿಗಳಿಗೆ ಜವಾಬ್ದಾರಿ ಹಾಗೂ ಗಣ್ಯರನ್ನು ಆಹ್ವಾನಿಸುವುದು, ವಿಶೇಷ ಸೇವೆ ಸಹಿತ ವಿವಿಧ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಯಿತು. ನವ ವೃಂದಾವನ ಸೇವಾ ಪ್ರತಿಷ್ಠಾನ ಹೊಸಬೆಟ್ಟು ಇದರ ಮೊಕ್ತೇಸರ ರಾಘವೇಂದ್ರ ಎಚ್.ವಿ., ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ವಿಶ್ವೇಶ್ವರ ಬದವಿದೆ, ವ್ಯವಸ್ಥಾಪನಾ ಸಮಿತಿ ಸಂಚಾಲಕ ಪುಂಡಲೀಕ ಹೊಸಬೆಟ್ಟು, ಹೊಸಬೆಟ್ಟು ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಹರಿಕೃಷ್ಣ ಸಾಲ್ಯಾನ್‌, ವೇ| ಮೂ| ಕಗ್ಗಿ ಶ್ರೀನಿವಾಸ ಆಚಾರ್ಯ ಚಿತ್ರಾಪುರ ವೇ| ಮೂ| ಶ್ರೀಕಾಂತ್‌ ಭಟ್ ಕೋಟೆಕಾರು, ಪ್ರಧಾನ ಕಾರ್ಯದರ್ಶಿ ಮಹೇಶಮೂರ್ತಿ ಸುರತ್ಕಲ್‌, ಮಾತೃಮಂಡಳಿ ಕಾರ್ಯದರ್ಶಿ ಕೆ. ಕಲಾವತಿ, ಎಚ್. ಹರಿಶ್ಚಂದ್ರ ಹೊಸಬೆಟ್ಟು, ಬಂಟ್ವಾಳ ಮೋನಪ್ಪ ಗೌಡ ಕಾರ್ಯದರ್ಶಿ, ಜಯಶ್ರೀ ರಟ್ಟಿಹಳ್ಳಿ, ಎ.ವಿ.ಎಸ್‌. ಶಗ್ರಿತ್ತಾಯ, ಪವನ ಮೈರ್ಪಾಡಿ, ಆನಂದ ಪಿ.ಎಚ್., ಸುಕುಮಾರ್‌ ಸುರತ್ಕಲ್‌, ಕೆ. ಕೃಷ್ಣ ಭಟ್, ನಾಗರಾಜ್‌ರಾವ್‌ ಹೊನ್ನಕಟ್ಟೆ, ಬಾಬುಗೌಡ ಬಲ್ನಾಡ್‌, ಮತ್ತಿತರರು ಉಪಸ್ಥಿತರಿದ್ದರು. ಶ್ರೀನಿವಾಸ ಕುಳಾಯಿ ನಿರೂಪಿಸಿದರು.

LEAVE A REPLY

Please enter your comment!
Please enter your name here