ನಗರ : ನಗರದ ಮೊಳಹಳ್ಳಿ ಶಿವರಾಯ ವೃತ್ತದ ಬಳಿ ಕೆಲವು ದಿನಗಳ ಹಿಂದೆ ವಾಹನವೊಂದರ ಚಕ್ರಕ್ಕೆ ಸಿಲುಕಿ ನಾಗರ ಹಾವು ಮೃತಪಟ್ಟ ಹಿನ್ನೆಲೆಯಲ್ಲಿ ಇದರ ಪರಿಹಾರಾರ್ಥವಾಗಿ ಶನಿವಾರ ಸಾರ್ವಜನಿಕ ಸರ್ಪ ಸಂಸ್ಕಾರ ನಡೆಸಲಾಯಿತು.
ವಿಶ್ವ ಹಿಂದೂ ಪರಿಷತ್, ಬಜರಂಗ ದಳದ ಕಾರ್ಯಕರ್ತರು, ರಿಕ್ಷಾ ಚಾಲಕರು ಹಾಗೂ ಸಾರ್ವಜನಿಕರ ನೇತೃತ್ವದಲ್ಲಿ ಹಣವನ್ನು ಸಂಗ್ರಹಿಸಿ ಧಾರ್ಮಿಕ ವಿಧಿ ನೆರವೇರಿಸಲಾಯಿತು. ಧಾರ್ಮಿಕ ಕಾರ್ಯಕ್ರಮವನ್ನು ವೇ| ಮೂ| ಕಬಕ ಶ್ರೀಧರ್ ಭಟ್ ನೆರವೇರಿಸಿದರು. ನಾಗತಂಬಿಲ, ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.