ಪೆರ್ಲಂಪಾಡಿ : ಪೆರ್ಲಂಪಾಡಿ ಉದಯಕ್ಷೇತ್ರದಲ್ಲಿ ಊರ ಜಾತ್ರೆ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲ ನಡೆಯಿತು. ಮಠತ್ತಡ್ಕ ಶ್ರೀ ವಿಷ್ಣುಮೂರ್ತಿ ದೈವಸ್ಥಾನದಿಂದ ಭಂಡಾರ ಆಗಮಿಸಿ, ರಾತ್ರಿ ಮೇಲೇರಿಗೆ ಅಗ್ನಿಸ್ಪರ್ಶ ಮಾಡಲಾಯಿತು. ಅನಂತರ ಅನ್ನಸಂತರ್ಪಣೆ ವಿತರಣೆ ನಡೆಯಿತು.
ಮರುದಿನ ಮುಂಜಾನೆ ಶ್ರೀ ವಿಷ್ಣುಮೂರ್ತಿ ದೈವ ಅಗ್ನಿಪ್ರವೇಶ, ಮಾರಿ ಕಲಕ್ಕೆ ಹೋಗುವುದು, ಗುಳಿಗ ನೇಮ ನಡೆ ಯಿತು. ಈ ಸಂದರ್ಭ ನೂರಾರು ಭಕ್ತರು ಉಪಸ್ಥಿತರಿದ್ದರು.
ಆನುವಂಶಿಕ ಆಡಳಿತ ಮೊಕ್ತೇಸರ ತಾರಾ ಪ್ರಸಾದ್ ರಾಮಕಜೆ, ಪ್ರಧಾನ ಕಾರ್ಯದರ್ಶಿ ಕೇಶವ ಗುರಿಕ್ಕಾನ, ಕೋಶಾಧಿಕಾರಿ ದೇವದಾಸ ಶೆಣೈ ಬಟ್ರಹಿತ್ಲು, ಉಪಾಧ್ಯಕ್ಷ ರಾಧಾಕೃಷ್ಣ ಕೇಕುಣ್ಣಾಯ, ಜತೆ ಕಾಯದರ್ಶಿ ಹರೀಶ್ ಕೆ. ಕಣಿ ಯಾರು, ಸಮಿತಿ ಸದಸ್ಯರಾದ ಶೀನಪ್ಪ ಗೌಡ ಮಾಲೆತ್ತೋಡಿ, ಕೃಷ್ಣ ಮಣಿಯಾಣಿ ಬಾಯಂಬಾಡಿ, ಮಾಯಿಲಪ್ಪ ಗೌಡ ಬದಿಯಡ್ಕ, ಎ.. ಶಿವರಾಮ ಹೊಳ್ಳ, ಪವಿತ್ರಾ ನೂಜಿ, ಎಂ.ಗುರುವಪ್ಪ, ಲಕ್ಷ್ಮಣ ಕೆ.ಎಸ್. ಪೆರ್ಲಂಪಾಡಿ, ವೆಂಕಟ ರಮಣ ಆಚಾರಿ, ಗುಡ್ಡಪ್ಪ ಗೌಡ ಬರಮೇಲು, ವೀರಪ್ಪ ಗೌಡ ಪೆರ್ಲಂಪಾಡಿ, ಜನಾರ್ದನ ಗೌಡ ಮೈರ ಗುಡ್ಡೆಮ ಆರ್.ಡಿ. ಹರೀಶ್ ಕುಧ್ಕುಳಿ, ಅಣ್ಣಯ್ಯ ಗೌಡ ದುಗ್ಗಳ, ಪರಮೇಶ್ವರ ಗೌಡ ದುಗ್ಗಳ, ಗಿರೀಶ್ ಪಾದೆಕಲ್ಲು, ಸತ್ಯಾನಂದ ಬರಡಿಮಜಲು, ಹರೀಶ್ ಕೆ. ಕೊಂರ್ಬಡ್ಕ, ಚಂದಪ್ಪ ಪೂಜಾರಿ ಪೆರ್ಲಂಪಾಡಿ, ನಾರಾಯಣ ನಾಯ್ಕ ಪೆರ್ಲಂಪಾಡಿ, ಗಣೇಶ್ ದುಗ್ಗಲ, ಸೋಮ ಕೆ. ಕಲಾಯಿ, ಸಂದೇಶ್ ಕಲಾಯಿ, ಸುಜಿತ್ ಕಲಾಯಿ, ಶೀನಪ್ಪ, ರಾಜೇಶ್, ಕೃಷ್ಣಪ್ಪ ಗೌಡ ಬಾಯಂಬಾಡಿ, ಊರಿನ ಪ್ರಮುಖರು ಉಪಸ್ಥಿತರಿದ್ದರು.