ಮೂಡುಬಿದಿರೆ,: ನಾಗರ ಕಟ್ಟೆಯ ಸಾರ್ವ ಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಆಶ್ರಯದಲ್ಲಿ ನಡೆಯುತ್ತಿರುವ 48ನೇ ವರ್ಷದ ಸಾ ರ್ವ ಜನಿಕ ಶ್ರೀ
ಸತ್ಯನಾರಾಯಣ ಪೂಜೆಯ ಉದ್ಯಾಪನೆಯ ಸಂಪೂರ್ಣ ಫಲಪ್ರಾಪ್ತಿಯೊಂದಿಗೆ ಲೋಕಕಲ್ಯಾಣಾರ್ಥವಾಗಿ ಶುಕ್ರವಾರ ಮಹಾವಿಷ್ಣು ಯಾಗವು ಮಾರೂರು ಖಂಡಿಗ ರಾಮದಾಸ ಆಸ್ರಣ್ಣ ಅವರ ಪೌರೋಹಿತ್ಯದಲ್ಲಿ ಜರಗಿತು. ಮಧ್ಯಾಹ್ನ ಪೂರ್ಣಾಹುತಿ, ಪ್ರಸಾದ ವಿತರಣೆ, ಮಹಾ ಅನ್ನಸಂತರ್ಪಣೆ, ಕಾಳಿ ಕಾಂಬಾ ಭಜನ ಮಂಡಳಿಯವರಿಂದ ಭಜನೆ, ಸಂಜೆ ಕಲಶ ಪ್ರತಿಷ್ಠೆಯಾಗಿ ಮಹಾಪೂಜೆ ನೆರವೇರಿತು.