ಕಟಪಾಡಿ: ಉಡುಪಿ ಮೂಡು ಅಲೆವೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ವೇ|ಮೂ| ವಿದ್ವಾನ್ ಹೆರ್ಗ ಜಯರಾಮ ತಂತ್ರಿಗಳ ನೇತೃತ್ವದಲ್ಲಿ ಪಂಚವಿಂಶತಿ ದ್ರವ್ಯ ಮೀಳಿತ ಪಂಚಶತೀ ಕಲಶ ಸಹಿತ ಬ್ರಹ್ಮಕುಂಭಾಭಿಷೇಕ ಗುರುವಾರ ಸಂಪನ್ನಗೊಂಡಿತು.
ಆ ಪ್ರಯುಕ್ತ ಬೆಳಗ್ಗೆ 7 ಗಂಟೆಗೆ ಕಲಶಾಭಿಷೇಕ ಆರಂಭಗೊಂಡಿದ್ದು, ಬ್ರಹ್ಮಕುಂಭಾಭಿಷೇಕದ ಅನಂತರ ನ್ಯಾಸ ಪೂಜೆ, ಭಜನೆ ಮಂಗಳ, ವಾಯುಸ್ತುತಿ ಹೋಮ, ಮಹಾಪೂಜೆ, ಪಲ್ಲಪೂಜೆ ನೆರವೇರಿದ್ದು, ಬ್ರಾಹ್ಮಣ ಸಂತರ್ಪಣೆ, ಭಕ್ತರಿಗೆ ಅನ್ನಸಂತರ್ಪಣೆ ಜರಗಿತು. ರಾತ್ರಿ ಪೂಜೆ, ಶೈವೋತ್ಸವ, ಪುಷ್ಪರಥೋತ್ಸವ ಅಷ್ಟಾವಧಾನ ಸೇವೆ. ಮಹಾರಂಗಪೂಜೆ, ಭೂತ ಬಲಿ ನೆರವೇರಿತು.
ಮಧ್ಯಾಹ್ನ ದಾಮೋದರ ಸೇರಿಗಾರ್ ಅವರಿಂದ ನಾಗಸ್ವರ ವಾದನ, ಸಂಜೆ ರಾಯಚೂರು ಶೇಷಗಿರಿದಾಸ್ ಇವರಿಂದ ದಾಸವಾಣಿ, ರಾತ್ರಿ ವೀರ ಬರ್ಬರಿಕಾ ತೆಂಕು ತಿಟ್ಟಿನ ಯಕ್ಷಗಾನ ಜರಗಿತು.
ಆಡಳಿತ ಮೊಕ್ತೇಸರ ವಾಮನ್ ಭಟ್, ಡಾ| ಸುದರ್ಶನ್ ಭಟ್ ಕುಲದೇವತಾ ಬಂಧುಗಳು, ಗ್ರಾಮಸ್ಥರು, ಊರ ಪರವೂರ ಭಕ್ತರು ಉಪಸ್ಥಿತರಿದ್ದರು.