ಮಹಾನಗರ : ಕಾವೂರು ಮಂಜಲಕಟ್ಟೆ ಶ್ರೀ ಕೋರªಬ್ಬು ದೈವಸ್ಥಾನದ ಪುನಃ ಪ್ರತಿಷ್ಠೆ, ಬ್ರಹ್ಮಕಲಶ ಹಾಗೂ ನೇಮ ಎ. 4ರಿಂದ 6ರ ವರೆಗೆ ಜರಗಲಿದೆ. ಈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾವೂರು ಶ್ರೀ ಮಹಾ ಲಿಂಗೇಶ್ವರ ದೇವಸ್ಥಾನದಲ್ಲಿ ಕ್ಷೇತ್ರದ ಪ್ರಧಾನ ಅರ್ಚಕ ಶ್ರೀನಿವಾಸ ಭಟ್ ಅವರ ನೇತೃತ್ವದಲ್ಲಿ ಜರಗಿತು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸಂದೇಶ್ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಾ| ವೈ. ಭರತ್ ಶೆಟ್ಟಿ, ಪುರುಷೋತ್ತಮ ಎನ್. ಪೂಜಾರಿ, ಸುಧಾಕರ ಶೆಟ್ಟಿ ಕಾವೂರು ಗುತ್ತು, ಕೆ. ಮೋಹನ್ ಪ್ರಭು, ಶ್ರೀನಿವಾಸ ಮೂರ್ತಿ ರಾಯರಮನೆ, ನಿಟ್ಟೆ ಶಶಿಧರ್ ಶೆಟ್ಟಿ, ಪ್ರಭಾಕರ್ ಶೆಟ್ಟಿ ಕೊಳಲಬೈಲು, ರಣದೀಪ್ ಕಾಂಚನ್, ಶ್ರೀಧರ್ ಎಂ., ಚಂದ್ರಶೇಖರ ಪೂಜಾರಿ, ಶ್ರೀ ನಿವಾಸ ದುಗ್ಗನಮನೆ, ಮಂಜುನಾಥ ಪ್ರಭು, ಪುಷ್ಪ ರಾಜ್ ಮೊಲಿ, ಚಂದ್ರಶೇಖರ್ ಕುಲಾಲ್ ಉಪಸ್ಥಿತರಿದ್ದರು.