Home ಧಾರ್ಮಿಕ ಸುದ್ದಿ ಕೊಲ್ಲಿ ದೇವಸ್ಥಾನ: ಷಡಾಧಾರ ಕಾರ್ಯಕ್ರಮ

ಕೊಲ್ಲಿ ದೇವಸ್ಥಾನ: ಷಡಾಧಾರ ಕಾರ್ಯಕ್ರಮ

2281
0
SHARE

ಬೆಳ್ತಂಗಡಿ : ಮಿತ್ತಬಾಗಿಲಿನ ಕೊಲ್ಲಿ ಶ್ರೀ ದುರ್ಗಾದೇವಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಆರಂಭ ಗೊಂಡಿದ್ದು, ಅದರ ಪೂರ್ವ ಭಾವಿಯಾಗಿ ಷಡಾಧಾರ ಕಾರ್ಯಕ್ರಮವು ವೇ|ಮೂ| ಆಲಂಬಾಡಿ ಪದ್ಮನಾಭ ತಂತ್ರಿ ಅವರ ನೇತೃತ್ವದಲ್ಲಿ ಕೊಲ್ಲಿ ಶ್ರೀ ದುರ್ಗಾದೇವಿ ದೇವಸ್ಥಾನದ ಪ್ರಧಾನ ಅರ್ಚಕ ಶಂಕರ ನಾರಾಯಣ ತೋಡ್ತಿಲ್ಲಾಯ ಅವರ ಉಪಸ್ಥಿತಿಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ಯು. ವಿಜಯರಾಘವ ಪಡ್ವೆಟ್ನಾಯ, ಕೊಲ್ಲಿ ಶ್ರೀ ದುರ್ಗಾದೇವಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮಂಜುನಾಥ ಕಾಮತ್‌, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ದಾಸಪ್ಪ ಗೌಡ, ಪ್ರಧಾನ ಕಾರ್ಯದರ್ಶಿ ಕೇಶವ ಫಡಕೆ, ಧಾರ್ಮಿಕ ದತ್ತಿ ಪರಿಷತ್‌ ಸದಸ್ಯ ಮುಕುಂದ ಸುವರ್ಣ, ಪೂವಣಿ ಗೌಡ ದಿಡುಪೆ, ಸತೀಶ್‌ ಕಾಮತ್‌ ಉಜಿರೆ, ಕೃಷ್ಣಪ್ಪ ಪೂಜಾರಿ ಕಿಲ್ಲೂರು, ಸೇಸಮ್ಮ ಕಿಲ್ಲೂರು, ಉಮೇಶ್ವರಿ ಬೆಡಿಗುತ್ತು, ಪೂವಪ್ಪ ಗೌಡ ಕೊಂಡಮಲೆ, ದೇವಸ್ಥಾನದ ಮೆನೇಜರ್‌ ಬಾಲಕೃಷ್ಣ ಎಲ್‌., ಭಕ್ತಾದಿಗಳು ಭಾಗವಹಿಸಿದ್ದರು.

ಗಣಪತಿ ಹೋಮ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಜೀರ್ಣೋದ್ಧಾರ ಸಮಿತಿಯ ಸಭೆ ನಡೆದು ಬೈಲುವಾರು ಸಮಿತಿಗಳನ್ನು ರಚಿಸಲಾಯಿತು.

LEAVE A REPLY

Please enter your comment!
Please enter your name here