ಕಡಬ : ಕೋಡಿಂಬಾಳ ಶ್ರೀ ಮಹಾವಿಷ್ಣು ದೇವಸ್ಥಾನ ಹಾಗೂ ಮಜ್ಜಾರು ಶ್ರೀ ಉಳ್ಳಾಕ್ಲು ರಾಜನ್ ದೈವಸ್ಥಾನದಲ್ಲಿ ನಡೆಯುವ ವಾರ್ಷಿಕ ಜಾತ್ರೋತ್ಸವದ ಪ್ರಯುಕ್ತ ಗುರುವಾರ ಉಗ್ರಾಣ ಮುಹೂರ್ತ ನಡೆದು ಹಸುರುವಾಣಿ ಸಮರ್ಪಣೆ ನಡೆಯಿತು.
ಬಳಿಕ ಕುಮಾರಧಾರಾ ನದಿ ಮೂಲಸ್ಥಾನದಲ್ಲಿ ವಾರ್ಷಿಕ ಪೂಜೆ ನಡೆದು ಮಧ್ಯಾಹ್ನ ದೇವಸ್ಥಾನದಲ್ಲಿ ಮಹಾಪೂಜೆ ನಡೆಯಿತು. ಬಳಿಕ ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ ನೆರವೇರಿತು. ಸಂಜೆ ಸಾಮೂಹಿಕ ಸತ್ಯನಾರಾಯಣ ಪೂಜೆ, ಆಶ್ಲೇಷಾ ಬಲಿ, ರಂಗಪೂಜೆ, ಪ್ರಸಾದ ವಿತರಣೆ ನಡೆದು ಅನಸಂತರ್ಪಣೆ ನಡೆಯಿತು.
ಶುಕ್ರವಾರ ಬೆಳಗ್ಗೆ ಮಹಾಗಣಪತಿ ಹೋಮ, ಕಲಶಪೂಜೆ, ಪಂಚಾಮೃತಾಭಿಷೇಕ, ಕಲಶಾಭಿಷೇಕ, ಅಶ್ವತ್ಥ ಪೂಜೆ, ನಾಗ, ದೈವಗಳಿಗೆ ತಂಬಿಲ ನಡೆಯಲಿದ್ದು, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಸ್ವಸ್ತಿ ಪುಣ್ಯಾಹವಾಚನ, ಕಲಶ ಪೂಜೆ, ಗಣಪತಿ ಹೋಮ, ಕಲಶಾಭಿಷೇಕ, ತಂಬಿಲ ಸೇವೆ, ದೈವಗಳ ಭಂಡಾರ ತೆಗೆದು ರಾತ್ರಿ ಉಳ್ಳಾಕ್ಲು, ಉಳ್ಳಾಳ್ತಿ, ಪುರುಷ ದೈವ, ಪರಿವಾರ ದೈವ, ಪಟ್ಟನ್ ದೈವ, ವ್ಯಾಘ್ರಚಾಮುಂಡಿ, ಪಂಜುರ್ಲಿ ಹಾಗೂ ಪರಿವಾರ ದೈವಗಳ ನೇಮ ನಡೆಯಲಿದೆ.
ರಾಜನ್ ದೈವದ ನೇಮ ಶನಿವಾರ ಪೂರ್ವಾಹ್ನ ಗಂಟೆ 7ರಿಂದ ರಾಜನ್ ದೈವದ ನೇಮ, 11 ಗಂಟೆಯಿಂದ ಪ್ರಸಾದ ವಿತರಣೆ, ಪ್ರಾರ್ಥನೆ ಹಾಗೂ ಹರಕೆ ಸಲ್ಲಿಕೆ ನಡೆಯಲಿದ್ದು, ಮಧ್ಯಾಹ್ನ 12 ಗಂಟೆ ಯಿಂದ ಅನ್ನಸಂತರ್ಪಣೆ ನೆರವೇರಲಿದೆ.