ಬ್ರಹ್ಮಾವರ: ಕಲ್ಯಾಣಪುರ ಶ್ರೀ ಆದಿಶಕ್ತಿ ವೀರಭದ್ರ ಬ್ರಹ್ಮಲಿಂಗ ದೇವಸ್ಥಾನದಲ್ಲಿ ಎ. 27ರಿಂದ ಮೇ 6ರ ವರೆಗೆ ನಡೆಯಲಿರುವ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕುಂಭಾಭಿಷೇಕದ ಪೂರ್ವಭಾವಿಯಾಗಿ ಬುಧವಾರ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಪುತ್ತೂರು ಹಯವದನ ತಂತ್ರಿಗಳ ನೇತೃತ್ವದಲ್ಲಿ ಚಪ್ಪರ ಮುಹೂರ್ತ ನೆರವೇರಿತು.
ಪ್ರಧಾನ ಮೊಕ್ತೇಸರ ಕೆ. ಜ್ಯೋತಿಪ್ರಸಾದ್ ವಿ. ಶೆಟ್ಟಿಗಾರ್ ಕಿನ್ನಿಮುಲ್ಕಿ, ಸ್ವಾಗತ ಸಮಿತಿಯ ಉಪಾಧ್ಯಕ್ಷೆ ಶೋಭಾ ಜ್ಯೋತಿಪ್ರಸಾದ್, ಬ್ರಹ್ಮಕಲಶ ಸಮಿತಿಯ ಪ್ರಧಾನ ಕಾರ್ಯದರ್ಶಿ ಸಂತೋಷ್ ಸಗ್ರಿ, ಉಪಾಧ್ಯಕ್ಷರಾದ ಕೃಷ್ಣ ಶೆಟ್ಟಿಗಾರ್ ದೇವಿನಗರ, ಅಶೋಕ್ ಶೆಟ್ಟಿಗಾರ್ ರಾಂಪುರ, ಗೌರವ ಕಾರ್ಯದರ್ಶಿ ರಾಜ್ ನಾರಾಯಣ್ ಸಾಯಿರಾಂ, ಸ್ಥಳೀಯ ಉದ್ಯಮಿ ಸದಾಶಿವ ಡಿ. ಶೆಟ್ಟಿ, ಕಟ್ಟಡ ಸಮಿತಿಯ ಪ್ರಧಾನ ಸಂಚಾಲಕ ಗಣೇಶ್ ಕೆ. ಶೆಟ್ಟಿಗಾರ್ ಪುತ್ತೂರು, ಸದಸ್ಯ ಉಮೇಶ್ ಕೆ. ಶೆಟ್ಟಿಗಾರ್ ಕರಂಬಳ್ಳಿ ಹಾಗೂ ವಿವಿಧ ವೇದಿಕೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.