ಪುಂಜಾಲಕಟ್ಟೆ : ಉಳಿ ಗ್ರಾಮದ ಕಕ್ಯಬೀಡು ಶ್ರೀ ಪಂಚದುರ್ಗಾ ಪರಮೇಶ್ವರೀ ದೇವಿ ಕ್ಷೇತ್ರದಲ್ಲಿ ಜ. 19ರ ವರೆಗೆ ನಡೆಯಲಿರುವ ವರ್ಷಾವಧಿ ಜಾತ್ರೆ ಪ್ರಯುಕ್ತ ಜ. 15ರಂದು ಚಂಡಿಕಾ ಹೋಮ ನಡೆಯಿತು.
ವೇ| ಮೂ| ಬಾಲಕೃಷ್ಣ ಪಾಂಗಣ್ಣಾಯ ಅವರ ನೇತೃತ್ವದಲ್ಲಿ ವೇದವ್ಯಾಸ ತಂತ್ರಿ ಮತ್ತು ಕ್ಷೇತ್ರದ ಪ್ರಧಾನ ಅರ್ಚಕ ಶ್ರೀನಿವಾಸ ಅರ್ಮುಡ್ತಾಯ ಅವರ ಸಹಕಾರದಲ್ಲಿ ಚಂಡಿಕಾ ಹೋಮದ ವಿಧಿ ವಿಧಾನಗಳು ನಡೆಯಿತು.
ಮಧ್ಯಾಹ್ನ ಚಂಡಿಕಾ ಹೋಮ ಪೂರ್ಣಾಹುತಿ, ಮಹಾಪೂಜೆ, ಸಂಜೆ ಚೆಂಡು ನಡೆಯಿತು. ಬಡೆಕೊಟ್ಟು ಅರು ಣೋದಯ ಯುವಕ ಮಂಡಲದಿಂದ ಮಜ್ಜಿಗೆ ವಿತರಣೆ ವ್ಯವಸ್ಥೆ ಗೊಳಿಸಲಾಗಿತ್ತು. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.
ದೇವಸ್ಥಾನದ ಸ್ಥಾಪಕಾಧ್ಯಕ್ಷ ಕೆ.ಜಾರಪ್ಪ ಶೆಟ್ಟಿ ಖಂಡಿಗ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಉಳಿ ದಾಮೋದರ ನಾಯಕ್, ಜಿ.ಪಂ. ಸದಸ್ಯ ಬಿ. ಪದ್ಮಶೇಖರ ಜೈನ್, ಸಮಿತಿ ಉಪಾಧ್ಯಕ್ಷರಾದ ಕೆ. ಮಾಯಿಲಪ್ಪ ಸಾಲ್ಯಾನ್, ವಿಶ್ವನಾಥ ಸಾಲ್ಯಾನ್ ಬಿತ್ತ, ಕೋಶಾಧಿಕಾರಿ ಪಿ. ರಾಮಯ್ಯ ಭಂಡಾರಿ, ಕಾರ್ಯದರ್ಶಿ ನಾರಾಯಣ ಪೂಜಾರಿ, ಜತೆ ಕಾರ್ಯದರ್ಶಿ ಅಗ್ಪಲ ಸಂಜೀವ ಗೌಡ, ಉತ್ಸವ ಸಮಿತಿ ಅಧ್ಯಕ್ಷ ವಾಸುದೇವ ಮಯ್ಯ, ಮೊಕ್ತೇಸರ, ಬಾರ್ದಡ್ ಗುತ್ತಿನ ಮನೆಯ ರಾಜವೀರ, ಗೌರವ ಸದಸ್ಯರಾದ ಡಾ| ಸತ್ಯಶಂಕರ ಶೆಟ್ಟಿ, ಡಾ| ಭಾರತಿ ಶೆಟ್ಟಿ, ಗ್ರಾ.ಪಂ.ಸದಸ್ಯ ಚಿದಾನಂದ ರೈ ಕಕ್ಯ, ಚೇತನ್ ಹೂರ್ದೊಟ್ಟು, ಉಳಿ ಸೇವಾ ಸಹಕಾರ ಬ್ಯಾಂಕ್ ಅಧ್ಯಕ್ಷ ಎ. ಚೆನ್ನಪ್ಪ ಸಾಲ್ಯಾನ್, ಬಾರ್ಯ-ಮೂರುಗೋಳಿ ಪ್ರಾ.ಕೃ.ಸ. ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಗೌಡ, ವಿದ್ಯಾ ಚಂದ್ರಹಾಸ ಶೆಟ್ಟಿ, ಮಹಾಬಲ ಶೆಟ್ಟಿ ನಂದಗೋಕುಲ, ಕಚೇರಿ ವ್ಯವಸ್ಥಾಪಕ ವೀರೇಂದ್ರ ಕುಮಾರ್ ಜೈನ್, ಶ್ರೀ ಸತ್ಯ ಸಾಯಿ ಸೇವಾ ಸಮಿತಿ, ಐವೆರ್ ಫ್ರೆಂಡ್ಸ್, ಶಿವಾಜಿ ಫ್ರೆಂಡ್ಸ್, ಜೀರ್ಣೋದ್ಧಾರ ಸಮಿತಿ, ಉತ್ಸವ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಜ. 17ರ ಕಾರ್ಯಕ್ರಮ
ಜ. 17ರಂದು ಬೆಳಗ್ಗೆ ದೈವಗಳ ತಂಬಿಲ, ಮಧ್ಯಾಹ್ನ ಮಹಾಪೂಜೆ, ಸಂಜೆ ದೇವರ ಪೇಟೆ ಸವಾರಿ, ಉತ್ಸವ, ಭೂತ ಬಲಿ, ಕವಾಟ ಬಂಧನ, ಶಯನ, ರಾತ್ರಿ ಕಕ್ಯಪದವು ಮಹಿಳಾ ಮಂಡಲ ಅವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.