ಸುಳ್ಯ : ಐವರ್ನಾಡು ಗ್ರಾಮದ ಪಾಲೆಪ್ಪಾಡಿ ವಯನಾಟ್ ಕುಲವನ್ ದೈವಸ್ಥಾನದಲ್ಲಿ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲವು ಶನಿವಾರ ಮತ್ತು ರವಿವಾರ ನಡೆಯಿತು.
ರಾತ್ರಿ ಭಂಡಾರ ತೆಗೆಯಲಾಯಿತು. ಬಳಿಕ ಮೇಲೇರಿಗೆ ನಡೆದ ಬಳಿಕ ಅನ್ನ ಸಂತರ್ಪಣೆ ನಡೆಯಿತು. ರಾತ್ರಿ ದೈವದ ಕುಳ್ಚಾಟ ಬಳಿಕ ಯಕ್ಷಗಾನ ಕೃಷ್ಣ ಕೃಷ್ಣ-ಶ್ರೀಕೃಷ್ಣ ಪ್ರದರ್ಶನಗೊಂಡಿತು. ರವಿವಾರ ದೈವದ ಅಗ್ನಿ ಪ್ರವೇಶ, ಬಳಿಕ ಪ್ರಸಾದ ವಿತರಣೆ ಹಾಗೂ ಮಾರಿಕಳ ನಡೆಯಿತು. ಪಾಲೆಪ್ಪಾಡಿ ಕುಟುಂಬಸ್ಥರು ಸಹಿತ ಸಾವಿರಾರು ಮಂದಿ ಭಕ್ತರು ಪಾಲ್ಗೊಂಡಿದ್ದರು. ಸುಡುಮದ್ದಿನ ಪ್ರದರ್ಶನವಿತ್ತು.