ವಿಟ್ಲ : ಶ್ರೀರಾಮಚಂದ್ರಾಪುರ ಮಠದ ಅಂಗಸಂಸ್ಥೆಯಾಗಿರುವ ಕಲ್ಲಡ್ಕ ಗೇರುಕಟ್ಟೆ ಶ್ರೀ ಉಮಾಶಿವ ಕ್ಷೇತ್ರದಲ್ಲಿ ನೂತನವಾಗಿ ನಿರ್ಮಿಸಲಾಗುವ ಮಂಗಲಧಾಮಕ್ಕೆ ಸೋಮವಾರ ಶಂಕುಸ್ಥಾಪನೆ ನೆರವೇರಿಸಲಾಯಿತು. ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಕಲ್ಲಡ್ಕ ಪ್ರಭಾಕರ ಭಟ್ ಅವರು ಶಂಕುಸ್ಥಾಪನೆ ನೆರವೇರಿಸಿ, ಮಾತನಾಡಿದರು.
ಹಿಂದೂಗಳು ಹಿಂದೂ ಸಮಾಜಕ್ಕೆ ಅಮೂಲ್ಯವಾದ ಕೊಡುಗೆಗಳನ್ನು ನೀಡಬೇಕು. ಸಮಾಜದ ಯಾವುದೇ ಉತ್ತಮ ಕಾರ್ಯಕ್ಕೆ ಬೆಂಬಲ ನೀಡಬೇಕು. ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಸಮಾಜದ ಉನ್ನತಿಗಾಗಿ, ಸಂಸ್ಕೃತಿಯ ಉಳಿವಿಗಾಗಿ ಶ್ರಮಿಸುತ್ತಿರುವ ರೀತಿ ಅಮೋಘವಾಗಿದೆ. ಶ್ರೀರಾಮ ಮತ್ತು ಶ್ರೀಕೃಷ್ಣ ದೇವರ ಆದರ್ಶಗಳನ್ನು ಮೈಗೂಡಿಸಿಕೊಂಡು ದೇಶದ ಉನ್ನತಿಗಾಗಿ ಅಪಾರ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಅವರು ಹೇಳಿದರು.
ಇಂದಿನ ಸರಕಾರ ಮಠ, ಮಂದಿರಗಳನ್ನು ಸ್ವಾಧೀನಪಡಿಸಿಕೊಳ್ಳುವ ಹುನ್ನಾರವನ್ನು ಇಟ್ಟುಕೊಂಡಿದೆ. ಇದು ಹಿಂದೂ ಸಮಾಜದ ಸ್ವಾತಂತ್ರÂಕ್ಕೆ ಧಕ್ಕೆ ತರುವ ಕ್ರಮವಾಗಿದೆ. ಇದು ಅಪಾಯಕಾರಿ ಬೆಳವಣಿಗೆ. ಈ ಬಗ್ಗೆ ಹಿಂದೂ ಸಮಾಜ ಜಾಗೃತವಾಗಬೇಕು ಎಂದು ಅವರು ಹೇಳಿದರು.
ಮಂಗಳೂರು ಹವ್ಯಕ ಮಂಡಲ ಅಧ್ಯಕ್ಷ ಸೇರಾಜೆ ಸುಬ್ರಹ್ಮಣ್ಯ ಭಟ್, ಡಾ| ಕಮಲಾ ಪ್ರಭಾಕರ ಭಟ್, ಬಿ.ಸಿ.ರೋಡ್ ಪರ್ಲಿಯಾ ಶ್ರೀರಾಮ ಕ್ಲಿನಿಕ್ನ ವೈದ್ಯ ಡಾ| ಎಂ.ಎಸ್. ಭಟ್, ಕುಪುಚಾರು ಮರಿ ಭಟ್, ಕುಪುಚಾರು ಡಾ| ಮರಿ ಭಟ್, ಮುಳ್ಳುಂಜ ವೆಂಕಟೇಶ್ವರ ಭಟ್, ಅಡ್ಕತ್ತಿಮಾರು ರಾಮಚಂದ್ರ ಭಟ್, ಕಲ್ಲಡ್ಕ ಹವ್ಯಕ ವಲಯ ದಿಗªರ್ಶಕ ಕುಧ್ಕುಳಿ ಕೃಷ್ಣ ಭಟ್ ಕೋಮಲೆ, ಕಾರ್ಯದರ್ಶಿ ಗಣೇಶ ಭಟ್, ಕೋಶಾಧಿಕಾರಿ ಎಸ್.ಎನ್.ಶ್ರೀಕಾಂತ್, ಸದಸ್ಯರಾದ ಶ್ಯಾಮ ಭಟ್ ಪಂಜಿಗದ್ದೆ, ಯತಿನ್ ಕುಮಾರ್ ಕಲ್ಲಡ್ಕ, ಡಾ| ಮನೋಜ್ ಕಲ್ಲಡ್ಕ, ಸತೀಶ ಪಂಜಿಗದ್ದೆ, ಮುರಳೀಕೃಷ್ಣ ಕುಕ್ಕಿಲ, ಈಶ್ವರ ಭಟ್ ಮನುಶ್ರೀ, ಡಾ| ಚಂದ್ರಶೇಖರ್, ಗೋಪಾಲಕೃಷ್ಣ ಭಟ್ ಮುಳಿಯ, ಬಾಲಕೃಷ್ಣ ಭಟ್, ಛತ್ರ ರಾಮ ಭಟ್, ಕುಪ್ಪುಚಾರು ಲಕ್ಷ್ಮೀ ಅಮ್ಮ, ಸಂಜೀವ ಮಾಡದಡಿ, ಮೆನೇಜರ್ ಬಾಲಸುಬ್ರಹ್ಮಣ್ಯ ಆರ್.ಕೆ. ಮೊದಲಾದವರು ಉಪಸ್ಥಿತರಿದ್ದರು. ಶ್ರೀ ಉಮಾಶಿವ ಸೇವಾ ಸಮಿತಿ ಅಧ್ಯಕ್ಷ ರಾಕೋಡಿ ಈಶ್ವರ ಭಟ್ ಸ್ವಾಗತಿಸಿ, ವಂದಿಸಿದರು.