ಉಡುಪಿ : ದೊಡ್ಡಣಗುಡ್ಡೆ ಶ್ರಿ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಶರನ್ನವರಾತ್ರಿಯ ಸಪ್ತಮಿ ತಿಥಿಯಂದು ಕ್ಷೇತ್ರದ ಧರ್ಮದರ್ಶಿ ರಮಾನಂದ ಗುರೂಜಿ ಉಪಸ್ಥಿತಿಯಲ್ಲಿ ಜೋಡಿ ಚಂಡಿಕಾ ಯಾಗವು ಸೇವೆ ನಡೆಯಿತು.
ಜೆಎಂಟಿ ಟ್ರಾವೆಲ್ಸ್ನ ಮಾಲಕರಾದ ಶ್ರೀಲತಾ ಆನಂದ ಬಾಯರಿ ಮತ್ತು ಮನೆಯವರು, ಪುಷ್ಪಾ ಎಳ್ಳಾರೆ ಮತ್ತು ಮನೆಯವರ ಸೇವಾರ್ಥ ಚಂಡಿಕಾಯಾಗ ಸಮರ್ಪಿತಗೊಂಡಿತು. ಪುತ್ತೂರು ಸೊರಕೆಯ ಬಾಲಚಂದ್ರ ಸೊರಕೆ ಸೇವಾರ್ಥ ತುಲಾಭಾರ ಸೇವೆ ನೆರವೇರಿತು. ಮಧ್ಯಾಹ್ನ ಮಹಾ ಅನ್ನಸಂತರ್ಪಣೆಯಲ್ಲಿ ಸಹಸ್ರಾರು ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು.
ಸಂಜೆ ಕಲೊ³àಕ್ತ ಪೂಜೆ ಸಹಿತ ರಂಗಪೂಜೆ, ದುರ್ಗಾ ನಮಸ್ಕಾರ ಪೂಜೆ, ಕ್ಷೇತ್ರದ ನವಶಕ್ತಿ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವಾಗಿ ವಿದುಷಿ ಶ್ರಾವ್ಯ ಮತ್ತು ಬಳಗದವರಿಂದ ನೃತ್ಯಾರ್ಪಣೆ ಸಮರ್ಪಿಸಲ್ಪಟ್ಟಿತು ಎಂದು ಕ್ಷೇತ್ರದ ಉಸ್ತುವಾರಿ ಕುಸುಮಾ ನಾಗರಾಜ್ ತಿಳಿಸಿದ್ದಾರೆ.