ಉಡುಪಿ: ಚಿಟ್ಪಾಡಿಬೀಡು ಶ್ರೀದೇವಿ ಭೂದೇವಿ ಸಹಿತ ಶ್ರೀ ಶ್ರೀನಿವಾಸ ದೇಗುಲದಲ್ಲಿ ಪುನರುತ್ಥಾನ ಪ್ರವೃತ್ತಿ ಅಂಗವಾಗಿ ಜೂ. 5ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡಿದ್ದು, ಜೂ. 12ರ ತನಕ ನಡೆಯಲಿವೆ.
ಜೂ. 12ರಂದು ಸಂಕೋಚ ಪ್ರಕ್ರಿಯೆ, ಸಂಹಾರ ತತ್ತ್ವ ಹೋಮ, ಗಣಯಾಗ, ಕಲಶಾಭಿಷೇಕ, ಜೀವ ಕುಂಭ ಸ್ಥಾಪನೆ, 10.55ಕ್ಕೆ ಬಾಲಾಲಯದಲ್ಲಿ ಬಿಂಬ ಪ್ರತಿಷ್ಠೆ, ಕಲಶಾಭಿಷೇಕ, ಶಿಖರ ವಿಸರ್ಜನೆ ನಡೆಯಲಿದೆ ಎಂದು ಮೊಕ್ತೇಸರ ಡಾ| ಗೋಪಾಲಕೃಷ್ಣ ಬಲ್ಲಾಳ್ ಚಿಟ್ಪಾಡಿಬೀಡು ಅವರು ತಿಳಿಸಿದ್ದಾರೆ.