ಪುಂಜಾಲಕಟ್ಟೆ: ಬಂಟ್ವಾಳ ತಾಲೂಕು ಅರಳ ಶ್ರೀ ಗರುಡ ಮಹಾಕಾಳಿ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವ ಅಂಗವಾಗಿ ರವಿವಾರ ರಾತ್ರಿ ಚಂದ್ರ ಮಂಡಲೋತ್ಸವ ಜರಗಿತು. ಹೂ ಮಾಲೆ, ವಿದ್ಯುದ್ದೀಪಗಳಿಂದ ಅಲಂಕೃತವಾದ ಚಂದ್ರಮಂಡಲ ರಥವನ್ನು ಭಕ್ತರು ಎಳೆದು ಸಂಭ್ರಮಿಸಿದರು.
ಕ್ಷೇತ್ರದ ತಂತ್ರಿ ವೇ|ಮೂ| ಬ್ರಹ್ಮಶ್ರೀ ನಡ್ವಂತಾಡಿ ಉದಯ ಪಾಂಗಣ್ಣಾಯ ಅವರ ನೇತೃತ್ವದಲ್ಲಿ ಕ್ಷೇತ್ರದ ಪ್ರಧಾನ ಅರ್ಚಕ ಎ. ರಾಜ ಭಟ್, ಹರೀಶ್ ಭಟ್, ದಿನೇಶ್ ಭಟ್ ರಾಯಿ ಅವರ ಸಹಕಾರದಲ್ಲಿ ವೈದಿಕ ಕಾರ್ಯಕ್ರಮಗಳು ನಡೆದವು. ಆಡಳಿತ ಮೊಕ್ತೇಸರ ಎ. ರಾಜೇಂದ್ರ ಶೆಟ್ಟಿ, ಅಮಾrಡಿ ಮಂಗ್ಲಿಮಾರ್ ಶ್ರೀ ಅಣ್ಣಪ್ಪ, ಕಲಾಯಿ ಮಹಮ್ಮಾಯಿ ದೇವಿ ಹಾಗೂ ಪರಿವಾರ ದೈವಗಳ ಕ್ಷೇತ್ರದ ಆಡಳಿತ ಮೊಕ್ತೇಸರ ಮಾವಂತೂರುಗುತ್ತು ರವಿಶಂಕರ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಎನ್.ಎಂ. ಅಡ್ಯಂತಾಯ, ಪುತ್ತಿಗೆ ಶ್ರೀ ಸೋಮನಾಥೇಶ್ವರ ದೇವಸ್ಥಾನ ಆಡಳಿತ ಮೊಕ್ತೇಸರ, ಮೂಡಬಿದಿರೆ ಚೌಟರ ಅರಮನೆಯ ಕುಲದೀಪ್ ಎಂ., ಆಡಳಿತ ಸಮಿತಿ ಕಾರ್ಯದರ್ಶಿ ಜಗದೀಶ ಆಳ್ವ ಅಗ್ಗೊಂಡೆ, ಪ್ರಮುಖರಾದ ಹರೀಶ್ಚಂದ್ರ ಪಕ್ಕಳ, ಮನೋಹರ ಶೆಟ್ಟಿ ಸಂಗಬೆಟ್ಟು, ಸುಬ್ಬಯ್ಯ ಶೆಟ್ಟಿ ಬಾರ್ಲಗುತ್ತು, ಅನಂತ ಭಟ್ ಕೊಯಿಲ, ದಿವಾಕರ ಶೆಟ್ಟಿ, ಗ್ರಾ.ಪಂ. ಅಧ್ಯಕ್ಷೆ ತುಂಗಮ್ಮ, ಸದಸ್ಯ ಲಕ್ಷ್ಮೀಧರ ಶೆಟ್ಟಿ, ರಾಮಣ್ಣ ರೈ ಮಾವಂತೂರು, ಉಮೇಶ್ ಡಿ.ಎಂ., ಚಂದ್ರಶೇಖರ ಶೆಟ್ಟಿ ಪಂಬದಬೆಟ್ಟು, ಮುರಳೀಧರ ಶೆಟ್ಟಿ, ಡೊಂಬಯ ಅರಳ ಮತ್ತಿತರರು ಉಪಸ್ಥಿತರಿದ್ದರು. ಜ.30ರಂದು ಸೋಮವಾರ ಮಧ್ಯಾಹ್ನ ಮಾವಂತೂರು ಕುಟುಂಬಿಕರಿಂದ ಬ್ರಾಹ್ಮಣಾರಾಧನೆ, ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಿತು.
ಜ.31ರಂದು ಬೆಳಗ್ಗೆ ಕವಾಟೋದ್ಘಾಟನೆ, ಅರಳ ಕೊಯಿಲ ಗ್ರಾಮಸ್ಥರಿಂದ ಶ್ರೀ ಚಂಡಿಕಾ ಯಾಗ, ಮಹಾಪೂಜೆ, ಚೂರ್ಣೋತ್ಸವ, ಮಧ್ಯಾಹ್ನ ಕಡೆಗುಂಡ್ಯ ಕುಟುಂಬಿಕರಿಂದ ಬ್ರಾಹ್ಮಣಾರಾಧನೆ ಮತ್ತು ಅನ್ನ ಸಂತರ್ಪಣೆ, ಶ್ರೀ ದೇವರ ಅವಭೃತ ಸ್ನಾನ, ಧ್ವಜಾವರೋಹಣ, ಶ್ರೀ ಧೂಮಾವತಿ ದೈವದ ನೇಮೋತ್ಸವ, ರಾತ್ರಿ ಶ್ರೀ ವಿನಾಯಕ ಭಜನ ಮಂಡಳಿ ಅಮ್ಮುಂಜೆ ಇವರಿಂದ ಭಜನ ಸೇವೆ, ಅನ್ನಸಂತರ್ಪಣೆ, ವಿಟ್ಠಲ ನಾಯಕ್ ಬಳಗ, ಕಲ್ಲಡ್ಕ ಇವರಿಂದ ಗೀತಾ ಸಾಹಿತ್ಯ ಸಂಭ್ರಮ ಪ್ರದರ್ಶನಗೊಳ್ಳಲಿದೆ.